ಯಕ್ಷಗಾನ ಕಲಾವಿದ ಗಾವಳಿ ಶೀನ ಕುಲಾಲರಿಗೆ ನೈಲಾಡಿ ರವಿರಾಜ ಶೆಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಜನವರಿ 15 , 2015
|
ಜನವರಿ 15, 2015
|
ಯಕ್ಷಗಾನ ಕಲಾವಿದ ಗಾವಳಿ ಶೀನ ಕುಲಾಲರಿಗೆ ನೈಲಾಡಿ ರವಿರಾಜ ಶೆಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ
ಶಿರಿಯಾರ :
ಇಲ್ಲಿಗೆ ಸಮೀಪದ ಗಾವಳಿ ಅಯ್ಯಪ್ಪ ಸ್ವಾಮಿ ಭಕ್ತರ ಶಬರಿಮಲೈಯಾತ್ರೆಯ 20ನೇ ವರ್ಷಾಚರಣೆ ಅಂಗವಾಗಿ ಅನ್ನ ಸಂತರ್ಪಣೆ ತಾಳಮದ್ದಳೆ ಶ್ರೀ ಕ್ಷೇತ್ರ ಮಂದಾರ್ತಿ ಮೇಳದವರ ಯಕ್ಷಗಾನ ಸೇವೆ ನಡೆಯಿತು ಸಂಜೆನೆಡೆದ ದಾರ್ಮಿಕ ಸಭೆಯಲ್ಲಿ ಹಿರಿಯ ಕಲಾವಿದ ಗಾವಳಿ ಶೀನ್ ಕುಲಾಲರಿಗೆ ನೈಲಾಡಿ ರವಿರಾಜ ಹೆಗ್ಡೆ ಸ್ಮಾರಕ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಯಕ್ಷಗಾನ ಕಲಾರಂಗದ ಅದ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅದ್ಯಕ್ಷತೆ ವಹಿಸಿದ್ದರು.
ಶುಬಾಶಂಸನೆ ಮತ್ತು ಅಭಿನಂದನಾ ಬಾಷಣ ಮಾಡಿದ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟಿಯವರು ಮಾತನಾಡಿ ಒಂದು ದೊಡ್ಡ ಮಟ್ಟದ ಸಾಮಾಜಿಕ ಸಂಸ್ಥೆ ಮಾಡಬೇಕಾದ ಕೆಲಸವನ್ನು ಗಾವಳಿಯ ಕೇಶವ ಪ್ರಭುಗಳು ಮಾಡಿ ತೋರಿಸಿದ್ದಾರೆ ದಾರ್ಮಿಕ ಕಾರ್ಯಕ್ರಮದಲ್ಲಿ ಕಲಾವಿದರನ್ನು ಗುರುತಿಸಿರುವುದು ಇತರರಿಗೆ ಅನುಕರಣೀಯ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ರಸ್ವಥ್ ಕುಮಾರ ಶೆಟ್ಟಿ, ಪ್ರಾದ್ಯಾಪಕ ಡಾ/ ಶ್ರೀಕಾಂತ್ ಸಿದ್ದಾಪುರ, ಕ್ರಷ್ಣ ಪ್ರಭು ಮುಖ್ಯ ಅತಿಥಿಯಾಗಿದ್ದರು. ಗಾವಳಿ ಉದಯಕುಮಾರ ಶೆಟ್ತಿ ಕಾರ್ಯಕ್ರಮ ಸಂಯ್ಯೋಜಿಸಿದ್ದರು. ಸಂಘಟಕ ಕೇಶವ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ಬಳಿಕ ಯಕ್ಷಗಾನ ತಾಳಮದ್ದಳೆ ನೆರವೇರಿತು.
|
|
|